ಪಯಣವೆತ್ತ?

ಅಂದು,
ಸ್ವಾತಂತ್ರ್ಯ ಬೇಕೆಂದು
ನಮ್ಮ ದೇಶ ನಮಗೇ ಬೇಕೆಂದು
ಸ್ವದೇಶೀ ಚಳವಳಿಮಾಡಿ
ಹೊರಗಟ್ಟಿದರು ವಿದೇಶೀಯರ
ನಮ್ಮ ಹಿರಿಯರು,
ದೇಶಕ್ಕಾಗೇ ಜೀವತೆತ್ತವರು.

ಇಂದು,
ವಿದೇಶಿ ಬಂಡವಾಳ ಹೂಡಿಕೆದಾರರ
ನಾವೇ ಆಹ್ವಾನಿಸಿ
ಹರಾಜು ಹಾಕಲು ಸಿದ್ಧರಾಗಿರುವೆವು
ನಮ್ಮ ಸ್ವಾತಂತ್ರ್ಯವನ್ನು.
ನೆಲ ನಮ್ಮದು, ಜಲ ನಮ್ಮದು
ಹಣಹಾಕಿ ಬೆಳೆತೆಗೆಯುವವರು
ವಿದೇಶೀಯರು!
ಆದಾಯ ಅವರಿಗೆ ಕೊಳೆ ನಮಗೆ
ಲಾಭ ಅವರಿಗೆ ಪರಿಸರ ನಾಶ ನಮಗೆ
ಉಳುವವನೇ ಭೂಮಿಗೊಡೆಯನೆಂದು
ಭೂಮಿಕಳಕೊಂಡ ಭೂಪತಿಗಳು ನಾವು!

ಮುಂದೆ,
ಬೆಳತೆಗೆಯವವನೇ
ಸೊತ್ತಿಗೊಡೆಯನೆಂದು
ಸಾರ್ವಭೌಮತ್ವ ಸಾರಿದರೆ
ಇನ್ನೊಮ್ಮೆ ಗುಲಾಮತ್ವದ ಕಡೆಗೆ
ನಮ್ಮ ಮಕ್ಕಳ ಒಪ್ಪಿಸಲು
ಸಿದ್ಧರಾಗಬೇಕೇ ನಾವು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು
Next post ಮಧ್ಯವಯಸ್ಸು

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys